ಹಾವೇರಿ- ಜಿಲ್ಲೆಯ ಹಾವೇರಿ ತಾಲೂಕಿನ ಸುಪ್ರಿಸಿದ್ಧ ಹಾವನೂರು ದ್ಯಾಮವ್ವನ ಜಾತ್ರೆಯಲ್ಲಿ ಮನ ಮಿಡಿಯುವ ಘಟನೆಯೊಂದು ನಡೆದಿದೆ.
ಎಂಟು ವರ್ಷದ ಬಾಲಕಿ ಅಂಜನಾ ಪುತ್ರಪ್ಪ ಗಂಟಿಚೋರ ಎಂಬುವಳು ಜಾತ್ರೆಯ ಜನಜಂಗುಳಿಯಲ್ಲಿ ಆಕಸ್ಮಿಕವಾಗಿ ತಾಯಿಯಿಂದ ತಪ್ಪಿಸಿಕೊಂಡಿದ್ದಾಳೆ. ಇದ್ದರಿಂದ ಕೆಲಗಂಟೆಗಳ ಕಾಲ ತಾಯಿ ಮತ್ತು ಮಗಳು ದೂರವಾಗಿದ್ದು, ಎರಡು ಜೀವಗಳು ಕಣ್ಣೀರು ಹಾಕಿವೆ.
ಈ ಸಂದರ್ಭ ಜಾತ್ರಾ ನಿಮಿತ್ತ ಕರ್ತವ್ಯಕ್ಕೆ ಹೋಗಿದ್ದ ಬ್ಯಾಡಗಿ ಪಿಎಸ್ ಐ ಮಹಾಂತೇಶ್ ಮತ್ತು ಅವರ ವಾಹನದ ಚಾಲಕರು, ಕಾನ್ಸಸ್ಟೇಬಲ್ ಹನುಮಂತ ಸುಂಕದ ಅವರ ಬಳಿ ಬಾಲಕಿ ಸಿಕ್ಕಿದ್ದು, ತಕ್ಷಣಕ್ಕೆ ಕಾರ್ಯ ಪ್ರವೃತ್ತರಾದ ಪಿಎಸ್ ಐ ಬಾಲಕಿಯಿಂದ ತಂದೆ ಹೆಸರು ಹಾಗೂ ಊರಿನ ಹೆಸರು ಪಡೆದುಕೊಂಡಿದ್ದಾರೆ.
ನಂತರ ಕೊಪ್ಪಳಕ್ಕೆ ಕರೆ ಮಾಡಿ ಬಾಲಕಿಯ ಗ್ರಾಮವಾದ ಹಿರೇಬೊಮ್ಮನಹಳ್ಳಿಯಲ್ಲಿ ಬಾಲಕಿ ತಂದೆಯ ನಂಬರ್ ಪಡೆದುಕೊಂಡಿದ್ದು, ನಿಮ್ಮ ಮಗಳು ನಮ್ಮ ಬಳಿ ಇರುವುದಾಗಿ ತಂದೆಗೆ ತಿಳಿಸಿದ್ದಾರೆ.ನಂತರ ಪೊಲೀಸ್ ಬಳಿ ಅವರ ತಾಯಿ ಬಂದು ಮಗಳನ್ನು ಕರೆದುಕೊಂಡು ಹೋಗಿದ್ದು, ಪೊಲೀಸರ್ ಮಾನವೀಯ ಕಾರ್ಯಕ್ಕೆ ಧನ್ಯವಾದ ತಿಳಿಸಿದ್ದಾಳೆ.
ಜಾತ್ರೆಯ ಸಂಭ್ರಮದಲ್ಲಿ ಕಳೆದುಕೊಂಡಿದ್ದ ತಾಯಿ-ಮಗಳನ್ನು ಒಂದಾಗಿಸಿದ ಪೊಲೀಸ್ ಪಡೆ ಕೂಡ ಭಾವುಕವಾಗಿತ್ತು..
More Stories
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತರುವುದಕ್ಕಾಗಿ ಹನಿಟ್ರ್ಯಾಪ್ ನಡೆದಿರುವ ಸಾಧ್ಯತೆ, ಎಲ್ಲ ಅಯಾಮಗಳಿಂದ ತನಿಖೆ. -ಬಸವರಾಜ್ ಬೊಮ್ಮಾಯಿ
ತವರು ಮನೆಗೆ ಬಂದಿದ್ದ ಅಜ್ಜಿಗೆ, ಯಮನ ರೂಪದಲ್ಲಿ ಕಾಡಿದ ಮನೆಯ ಮೇಲ್ಚಾವಣಿ.
ಕಚ್ಚೆ ಹರುಕರನ್ನೆಲ್ಲ ಗುಡ್ಡೆ ಹಾಕ್ಕೊಂಡು ಮುಖ್ಯಮಂತ್ರಿ ಹೆಂಗೆ ಕೆಲಸ ಮಾಡ್ತಾರೋ ಅರ್ಥ ಆಗ್ತಿಲ್ಲ. -ಕೋಡಿಹಳ್ಳಿ ಚಂದ್ರಶೇಖರ