ರಸ್ತೆ ಮಧ್ಯೆಯೇ ಹೊತ್ತಿ ಊರಿದ ಕಾರು- ಟಿಪ್ಪರ್
____
ದಾವಣಗೆರೆ – ಟಿಪ್ಪರ್ ಲಾರಿ ಹಾಗೂ ಕಾರ್ ಮಧ್ಯೆ ಅಪಘಾತ ಸಂಭವಿಸಿ, ರಾಷ್ಟ್ರೀಯ ಹೆದ್ದಾರಿ ೪ ರಲ್ಲಿಯೇ ಧಗಧಗನೆ ಹೊತ್ತಿ ಉರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ 4 ರ ಬೈಪಾಸ್ನಲ್ಲಿ ಈ ಘಟನೆ ನಡೆದಿದೆ. ಕಾರು ಬೆಂಗಳೂರಿನಿಂದ ಹುಬ್ಬಳ್ಳಿ ಕಡೆ ಸಾಗುತ್ತಿತ್ತು. ಈ ವೇಳೆ ಟಿಪ್ಪರ್ ಲಾರಿ ದಾವಣಗೆರೆಯ ಕಡೆಗೆ ರಸ್ತೆ ಕ್ರಾಸ್ ಆಗುತ್ತಿತ್ತು. ಆಗ ಎರಡು ವಾಹನಗಳ ನಡುವೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಎರಡು ವಾಹನಗಳು ಹೊತ್ತಿ ಉರಿದು ಹೋಗಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ದಾವಣಗೆರೆ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ ಒಂದು ವರ್ಷದೊಳಗೆ ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು. -ಬಿ.ಎಸ್.ಯಡಿಯೂರಪ್ಪ
_____
More Stories
ರಸ್ತೆಯಲ್ಲಿ ಗೋಳಾಡುತ್ತಿರುವ ರೈತರನ್ನು ಕಂಡು ಕಾರು ನಿಲ್ಲಿಸಿದ ಎಮ್.ಪಿ.ರೇಣುಕಾಚಾರ್ಯ: ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..!?
ಓಡಿ ಹೋಗಿ ಮದ್ವೆ ಆಗುತ್ತಿದ್ದ ಪ್ರೇಮಿಗಳಿಗೆ ಆಶೀರ್ವದಿಸಿದ ಎಮ್.ಪಿ.ರೇಣುಕಾಚಾರ್ಯ: ಪೋಷಕರು ಏನಂದ್ರು ಗೊತ್ತಾ…?
ಇನೋವಾ ಕಾರು ಪಲ್ಟಿಯಾದರೂ ತಪ್ಪಿದ ದೊಡ್ಡ ಅನಾಹುತ..!