ಬಜೆಟ್ ನಲ್ಲಿ ರೈತರಿಗಾಗಿ ತಂದ ಹೊಸ 10 ಬಂಪರ್ ಯೋಜನೆಗಳು ನಿಮಗೆ ಗೊತ್ತಾ? ಹಾಗಾದ್ರೆ ಇಲ್ಲಿದೆ ನೋಡಿ. ರೈತರಿಗೆ ಸಿಹಿ ಸುದ್ದಿ
ರೈತರಿಗೆ ಸಿಹಿಸುದ್ದಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಹಲವಾರು ರೀತಿಯ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುವುದರ ಮೂಲಕ ರೈತರಿಗೆ ಶುಭ ಸುದ್ದಿ ನೀಡಿದೆ.
ಹಾಗೆಯೇ ರೈತರಿಗೆ ಕೃಷಿಯಲ್ಲಿ ಬೇಕಾಗುವ ಎಲ್ಲಾ ಅನುಕೂಲವನ್ನು ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಫ್ರೆಬ್ರವರಿ 01 2023 ರಂದು ಕೇಂದ್ರ ಬಜೆಟ್ ಘೋಷಿಸಿದ್ದಾರೆ.
ಬಜೆಟ್ ಘೋಷಣೆಯಲ್ಲಿ ಅದ್ಭುತ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಯೋಜನೆಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ, ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ನೋಡಿ.
ಪ್ರಮುಖ ಅಂಶಗಳು:
ರೈತರಿಗೆ ಪ್ರೋತ್ಸಾಹ ಧನ
ವಸತಿ ಕುಡಿಯುವ ನೀರು ಯೋಜನೆ
ವಿದ್ಯುತ್ ಮತ್ತು ರಸ್ತೆ ಅಭಿವೃದ್ದಿಗೆ ಅನುದಾನ
ಹೈನುಗಾರಿಕೆಗೆ ಸಾಲ
ಮೀನುಗಾರಿಕೆಗೆ ಸಾಲ
ಭದ್ರಾ ಮೇಲ್ದಂಡೆ ಯೋಜನೆ
ಕೌಶಲ್ಯ ಸಮ್ಮಾನ್ ಯೋಜನೆ
ಗೋವರ್ಧನ್ ಯೋಜನೆ
ಉಚಿತವಾಗಿ ಧಾನ್ಯ
ಉಜ್ವಲ ಯೋಜನೆ
ಮೊದಲಿಗೆ ರೈತರ ಸಮಸ್ಯೆ ಬಗೆಹರಿಸಲು ಕೃಷಿಆಧಾರಿತ ಸೌಲಭ್ಯಗಳನ್ನು ಸ್ಮಾರ್ಟ್ ಫೋನ್ ಗಳನ್ನು ಕೊಡಲಾಗುತ್ತದೆ. ಅದಕ್ಕೆ ಅನುದಾನವನ್ನು ಕೊಡಲಾಗುತ್ತದೆ ಎಂದು ಹೇಳಲಾಗಿದೆ.
ವಸತಿ ಕುಡಿಯುವ ನೀರು ವಿದ್ಯುತ್ ಮತ್ತು ರಸ್ತೆ ಅಭಿವೃದ್ದಿಗೆ ಅನುದಾನವನ್ನು ಹೂಡಿಕೆ ಮಾಡಲಾಗುತ್ತದೆ.
ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಲಾಗುವುದು.
ದೇಶದ ರೈತರಿಗೆ 20 ಕೋಟಿ ರೂಪಾಯಿ ಸಾಲಸೌಲಭ್ಯವನ್ನು ನೀಡಲಾಗುವುದು ಹಾಗೂ ಶೇಕಡಾ 3ರಷ್ಟು ಬಡ್ಡಿದರದಲ್ಲಿ ಸಾಲಸೌಲಭ್ಯ ಸಿಗಲಿದೆ ಎಂದು ಘೋಷಿಸಲಾಗಿದೆ.
ದೇಶದಲ್ಲಿ ಕೃಷಿಯ ಜೊತೆ ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಹೆಚ್ಚಿನ ಮಹತ್ವ ನೀಡಲಾಗುವುದು.
ಮೀನುಗಾರಿಕೆಗೆ 6 ಸಾವಿರ ಕೋಟಿ ವೆಚ್ಚ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರೈತರನ್ನು ಒಳಗೊಂಡು ದೇಶದಲ್ಲಿ 63 ಸಾವಿರಕ್ಕೂ ಹೆಚ್ಚು ಕೃಷಿಪತ್ತಿನ ಸಹಕಾರ ಸಂಘಗಳಿಗೆ ಅನುಕೂಲ ಮಾಡಿಕೊಡಲಾಗುವುದು ಹಾಗೂ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ರೈತರಿಗೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಸಾವಿರ ಕೋಟಿ ಹಣವನ್ನು ನೀಡಲು ನಿರ್ಧರಿಸಲಾಗಿದೆ.
ಗ್ರಾಮೀಣ ಭಾಗದಲ್ಲಿರುವ ಕುಶಲ ಕರ್ಮಿಗಳಿಗೆ ಕೌಶಲ್ಯ ಸಮ್ಮಾನ್ ಯೋಜನೆಯನ್ನು ಜಾರಿಗೆ ಮಾಡಲಾಗಿದೆ.
ಜಾಮೀನು ಹಣವನ್ನು ಕಟ್ಟಲಾಗದ ಬಡವರಿಗೆ ಕೇಂದ್ರ ಸರ್ಕಾರದಿಂದ ಸಹಾಯ ಮಾಡಲಾಗಿದೆ.
ಜೈವಿಕ ಗೊಬ್ಬರವನ್ನು ಮಾಡಲು ಗೋವರ್ಧನ್ ಯೋಜನೆಯನ್ನು ಮಾಡಲಾಗಿದೆ. ಇದೆ ಜೊತೆಗೆ 1 ಕೋಟಿ ರೈತರಿಗೆ ಸಾವಯವ ಕೃಷಿಗೆ ಉತ್ತೇಜನ ನೀಡಲು ಪ್ರೋತ್ಸಾಹ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
BPL ಪಡಿತರ ಕಾರ್ಡ್ ಹೊಂದಿದವರಿಗೆ ದೇಶದ 80 ಕೋಟಿ ಜನವರಿಗೆ ಉಚಿತವಾಗಿ ಧಾನ್ಯವನ್ನು ಮುಂದಿನ ವರ್ಷದಲ್ಲಿ ನೀಡಲಾಗುತ್ತದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಬರುವ ವರ್ಷದಲ್ಲಿ 11 ಕೋಟಿ 40 ಲಕ್ಷ ಜನರಿಗೆ 2.2 ಲಕ್ಷ ಕೋಟಿ ಹಣವನ್ನು ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮೀಸಲು ನೀಡಲಾಗಿದೆ.
ಉಜ್ವಲ ಯೋಜನೆಯಲ್ಲಿ 9.6 ಕೋಟಿ ಗ್ಯಾಸ್ ಸಂಪರ್ಕವನ್ನು ಪ್ರತಿ ಮನೆಗೆ ಕಲ್ಪಿಸಲಾಗುವುದು. ಹಾಗೆಯೇ 7 ಲಕ್ಷ ರೂಪಾಯಿ ಆದಾಯ ತೆರಿಗೆಯನ್ನು ಪಾವತಿ ಮಾಡುವಂತಿಲ್ಲ.
ಆದಾಯ ತೆರಿಗೆ ಪಾವತಿದಾರರಿಗೆ ಇದೊಂದು ಸಿಹಿಸುದ್ದಿ ಎಂದು ಹೇಳಬಹುದು.