ರೈತರಿಗೆ ಭರ್ಜರಿ ಸಂತಸದ ಸುದ್ದಿ ಬೆಳೆ ಹಾನಿ ಪರಿಹಾರ ಮತ್ತೆ ದ್ವಿಗುಣ, ಸೂಪರ್ ಗಿಪ್ಟ್ ಕೊಟ್ಟ ಸರ್ಕಾರ
ನಮಸ್ಕಾರ, ರೈತ ಭಾಂಧವರೇ ನಿಮಗೆ ಶುಭ ಸುದ್ದಿ, ಬೆಳೆ ಹಾನಿಗೊಳಗಾದ ರೈತರಿಗೆ ದುಪ್ಪಟ್ಟು ಬೆಳೆ ಪರಿಹಾರ ಹಣ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ರೈತ ಭಾಂದವರಿಗೆ ರೈತ ಸಮುದಾಯಕ್ಕೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬೆಳೆ ಯಾವ ಕಾರಣಕ್ಕೆ ಹಾನಿಯಾಗಿದೆ ಎಂದು ಮತ್ತು ಅದಕ್ಕೆ ಪರಿಹಾರ ನೀಡಲು ಮುಂದಾಗಿದೆ. ಬೆಳೆ ಪರಿಹಾರ ಹಣವನ್ನು ಜಾಸ್ತಿ ಮಾಡಲಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಸಂಪೂರ್ಣವಾಗಿ ಎಲ್ಲರೂ ಓದಿ.
ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು
ಕೇಂದ್ರ ಸರ್ಕಾರ
ಕೇಂದ್ರ ಬಜೆಟ್
ಪ್ರಮುಖ ಘೋಷಣೆಗಳು
ಬಜೆಟ್ ಘೋಷಣೆಯ ದಿನಾಂಕ
01-02-2023 ಫೆಬ್ರವರಿ
ಘೋಷಿಸಿದವರು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಪರಿಹಾರ ದುಪ್ಪಟ್ಟು :
ಮೊದಲು ರೈತರಿಗೆ ಬೆಳೆಹಾನಿ ಯನ್ನು 50 ಸಾವಿರ ಹಣವನ್ನು ನೀಡಲಾಗುತ್ತಿತ್ತು. ಆದರೆ ಜನವರಿ 18 ರಂದು 1 ಲಕ್ಷಕ್ಕೆ ಹೆಚ್ಚಿಸಲಾಗಿದೆ ಈಗ 1 ಲಕ್ಷ ಹಣವನ್ನು ಪರಿಹಾರ ಮೊತ್ತ ನೀಡಲಾಗುತ್ತದೆ.
ಹೊಸದಾಗಿ ಸೇರಿಸಲಾದ ಬೆಳೆಗಳು :
ಬೆಳೇ ಪಟ್ಟಿಗೆ ಹೊಸದಾಗಿ ಮಾವು, ಸಪೋಟ, ಸೀಬೆ, ಹಲಸು, ದಾಳಿಂಬೆ, ಸೀತಾಫಲ, ಹಿಪ್ಪುನೇರಳೆಯನ್ನು ಸೇರಿಸಲಾಗಿದೆ. ಅಲ್ಲದೇ ಪಟ್ಟಿಯಲ್ಲಿ ಈಗಾಗಲೇ ಭತ್ತ, ಜೋಳ, ವಿವಿಧ ತರಕಾರಿ, ಕಾಫಿ, ಕಿತ್ತಳೆ, ತೆಂಗು, ಅಡಿಕೆ, ಬಾಳೆ, ಸೇವಂತಿ ಸಹಿತ ಒಟ್ಟು 64 ಬೆಳೆಗಳು ಇವೆ.
ಮರಗಳಿಗೆ ವಯಸ್ಸಿನ ಆಧಾರದ ಮೇಲೆ ಪರಿಹಾರ :
ಭತ್ತ- ಪರಿಹಾರ ಮೊತ್ತ ಕ್ವಿಂಟಾಲ್ 1320 ರೂ ಇದ್ದದ್ದು 2,460 ರೂಗಳಿಗೆ ಹೆಚ್ಚಿಸಲಾಗಿದೆ.
ಮಾವು- 5 ವರ್ಷಕ್ಕಿಂತ ಕಡಿಮೆಯ ಗಿಡಕ್ಕೆ ರೂ 750, 6-ರಿಂದ 10 ವರ್ಷದವರೆಗಿನ ಗಿಡಕ್ಕೆ ರೂ 1,200 ಹಾಗೂ 10 ವರ್ಷ ದಾಟಿದ ಮರಕ್ಕೆ 1,800 ನೀಡಲಾಗುವುದು.
ಸಪೋಟ- 5 ವರ್ಷಕ್ಕಿಂತ ಕಡಿಮೆಯ ಗಿಡಕ್ಕೆ ರೂ 500 ಹಾಗೂ 5 ವರ್ಷ ದಾಟಿದ ಮರಕ್ಕೆ ರೂ 800.
ಸೀಬೆ- 5 ವರ್ಷಕ್ಕಿಂತ ಕಡಿಮೆಯ ಗಿಡಕ್ಕೆ ರೂ 350 ಮತ್ತು 5 ವರ್ಷ ದಾಟಿದ ಮರಕ್ಕೆ ರೂ 600 ನಿಗದಿಪಡಿಸಲಾಗಿದೆ
ಹಲಸು- 5 ವರ್ಷಕ್ಕಿಂತ ಕಡಿಮೆಯ ಗಿಡಕ್ಕೆ ರೂ 350 ಮತ್ತು 5 ವರ್ಷ ದಾಟಿದ ಮರಕ್ಕೆ ರೂ 800 ನಿಗದಿಪಡಿಸಲಾಗಿದೆ.
ದಾಳಿಂಬೆ- ಗಿಡಕ್ಕೆ ರೂ 300, ಸೀತಾಫಲಕ್ಕೆ ರೂ 250 ಹಾಗೂ ಹಿಪ್ಪುನೇರಳೆ ಗುಂಟೆಗೆ ರೂ 100 ನಿಗದಿಪಡಿಸಲಾಗಿದೆ.
ಕಾಫಿ ಅರೇಬಿಕಾ ಗಿಡಕ್ಕೆ– 1 ರಿಂದ 4 ವರ್ಷ ರೂ 600 ಹಾಗೂ ನಾಲ್ಕು ವರ್ಷ ದಾಟಿದ ಗಿಡಕ್ಕೆ 1,200 ಹಾಗೂ ರೋಬೊಸ್ಟಾ ಗಿಡಕ್ಕೆ– ರೂ 1,500, 1 ರಿಂದ 6 ವರ್ಷ ಹಾಗೂ 6 ವರ್ಷ ದಾಟಿದ ಗಿಡಕ್ಕೆ ರು 3,000 ಕ್ಕೆ ಪರಿಷ್ಕರಿಸಲಾಗಿದೆ.
ಒತ್ತುವರಿ ಮಾಡಿದ ಅರಣ್ಯ ಪ್ರದೇಶದಲ್ಲಿ ಬೆಳೆದ ಪೈರಿನ ಹಾನಿಗೆ ಪರಿಹಾರ ಲಭಿಸಲ್ಲ ಎಂದು ಸರ್ಕಾರ ಆದೇಶದಲ್ಲಿ ತಿಳಿಸಲಾಗಿದೆ.